Punith Kumar r

  • Home
  • Punith Kumar r

Punith Kumar r Contact information, map and directions, contact form, opening hours, services, ratings, photos, videos and announcements from Punith Kumar r, Tour Agency, .

05/11/2022

ಕಾಸರಗೋಡು ಕೇರಳಕ್ಕೆ ಸೇರಿಹೋಯ್ತು !
ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು‌ !
ಕೋಲಾರ, ಬಳ್ಳಾರಿ, ರಾಯಚೂರು ಆಂಧ್ರಕ್ಕೆ !

ಅಲ್ಲಿಗೆ....
ಉದಯವಾಯಿತು ನಮ್ಮ ಚೆಲುವ ಕನ್ನಡನಾಡು !!

ಉದಯ ಟಿವಿ ಮದ್ರಾಸ್‌ನವರದ್ದು !
ಸುವರ್ಣ ಟಿವಿ ಕೇರಳರವರದ್ದು,
ಕಲರ್ಸ್ ಟಿವಿ ಬಾಂಬೆ !
ಈಟಿವಿ ಆಂಧ್ರದವರದ್ದು !
ಜೀಟಿವಿ ಉತ್ತರ ಭಾರತರವರದ್ದು !
ತಲಕಾವೇರಿಯಲಿ ಹುಟ್ಟುವ ಕಾವೇರಿ ತಮಿಳುನಾಡಿಗೆ !

ಅಲ್ಲಿಗೆ....
ಉದಯವಾಯಿತು ನಮ್ಮ ಚೆಲುವ ಕನ್ನಡನಾಡು !!

ಐಎಎಸ್‌ ಆಫೀಸರ್‌ಗಳೆಲ್ಲಾ ಉತ್ತರಭಾರತದವರು !
ಐಪಿಎಸ್‌ ಆಫೀಸರ್‌ಗಳೆಲ್ಲ ಪರರಾಜ್ಯದವರು !
ಬ್ಯಾಂಕ್ ಅಧಿಕಾರ ಗಳೆಲ್ಲಾ ಪರಭಾಷೆಯವರು !
ಡ್ರೆೃವರ್‌ಗಳು, ಅಟೆಂಡರ್‌ಗಳು, ಸ್ವೀಪರ್‌ಗಳೆಲ್ಲ ಕನ್ನಡದವರು !

ಅಲ್ಲಿಗೆ....
ಉದಯವಾಯಿತು ನಮ್ಮ ಚೆಲುವ ಕನ್ನಡನಾಡು !!

ಚಿನ್ನದಂಗಡಿ, ಬಟ್ಟೆಯಂಗಡಿ, ಎಲ್ಲಾ ದೊಡ್ಡ ಅಂಗಡಿ ಮುಂಗಟ್ಟುಗಳು ಪರರಾಜ್ಯದವರವು !
ಅಲ್ಲಿ ಚೌಕಾಸಿ ಮಾಡುತ್ತಾ, ಕೊಂಡುಕೊಳ್ಳಲು ಸಾಲುಗಟ್ಟುವ ಗ್ರಾಹಕರು ಕನ್ನಡದವರು !

ಅಲ್ಲಿಗೆ...
ಉದಯವಾಯಿತು ನಮ್ಮ ಚಲುವ ಕನ್ನಡ ನಾಡು !!

ಸದಾಶಿವನಗರ ಸಿಂಧಿಗಳದ್ದು !
ಬಳೇಪೇಟೆ, ಚಿಕ್ಕಪೇಟೆ ಮಾರ್ವಾಡಿಗಳದ್ದು !

ಮಾವಳ್ಳಿ, ಗುಟ್ಟಹಳ್ಳಿ, ಸುಂಕನಹಳ್ಳಿಗಳೆಲ್ಲಾ ಕನ್ನಡಿಗರದ್ದು !

ಅಲ್ಲಿಗೆ....
ಉದಯವಾಯಿತು ನಮ್ಮ ಚೆಲುವ ಕನ್ನಡನಾಡು !!

ಹಿರೋಯಿನ್‌ಗಳು ಮುಂಬೈನವರು !
ಡೈರೆಕ್ಟರ್‌ಗಳು ಆಂಧ್ರ -ತಮಿಳುನಾಡಿನವರು !
ಲೈಟ್‌ಬಾಯ್ಸ್‌, ಪ್ರೊಡೆಕ್ಷನ್‌ ಬಾಯ್ಸ್‌, ಸೆಟ್‌ ಬಾಯ್ಸ್‌ಗಳೆಲ್ಲಾ
ಕನ್ನಡದವರು !

ಅಲ್ಲಿಗೆ....
ಉದಯವಾಯಿತು ನಮ್ಮ ಚೆಲುವ ಕನ್ನಡನಾಡು !!

ಪರಭಾಷೆಯ ಸಿನಿಮಾ, ಕಾರ್ಯಕ್ರಮ ನಮ್ಮ ಮಾತೃಭಾಷೆಗೆ ಅನುವಾದವಾಗಲೀ ಎಂದರೇ
ತಮ್ಮ ಸ್ವಾರ್ಥ ಕ್ಕಾಗಿ ನಮ್ಮಂವರಿಂದಲೇ ಪ್ರತಿಭಟನೆ

ಪರಭಾಷೆಯ ಸಿನಿಮಾ ಕೋಟಿ, ಕೋಟಿ ಗಳಿಸಿವಾಗ ಎಲ್ಲರೂ 'ಮೂಕಪ್ರೇಕ್ಷಕರು' !

ಅಲ್ಲಿಗೆ...
ಉದಯವಾಯಿತು ನಮ್ಮ ಚೆಲುವ ಕನ್ನಡನಾಡು !!

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ !
ತುಳುನಾಡು ಪ್ರತ್ಯೇಕ ರಾಜ್ಯ !
ಬೆಂಗಳೂರು ಕೇಂದ್ರಾಡಳಿತ ಪ್ರದೇಶ !

ಅಲ್ಲಿಗೆ
ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು !!

ಕನ್ನಡಿಗರೇ, ಸ್ವಾಭಿಮಾನಿಗಳಾಗಿ, ಗುಲಾಮ ಸಂಸ್ಕೃತಿ, ಹಿಂದಿ ಹೇರಿಕೆ,
ಉತ್ತರ ಭಾರತೀಯರ ಕುತಂತ್ರ.
ವಲಸಿಗರ ಪುಂಡಾಟಕ್ಕೆ ಉತ್ತರ...
ನಮ್ಮ ತನದ ಉಳಿವಿಗೆ ಹೋರಾಡುವುದು !!

ರಾಯಣ್ಣ, ಅಬ್ಬಕ್ಕ, ಕುವೆಂಪು, ಬಸವಣ್ಣ, ಪುಲಿಕೇಶಿ, ರಾಜಣ್ಣ ಕನ್ನಡಿಗರ ಗುರುತಾಗಲಿ....

ಕರ್ನಾಟಕ, ಕನ್ನಡದ ಬಗ್ಗೆ ನಮಗೇ ಅಭಿಮಾನವಿಲ್ಲದಿದ್ದಲ್ಲಿ ಮುಂದೊಂದು ದಿನ
ಕರ್ನಾಟಕವನ್ನು ಉತ್ತರ ಭಾರತದವರಿಗೆ ಮತ್ತು ವಲಸಿಗರಿಗೇ ಮಾರಿ, ಕನ್ನಡಿಗರು ಭಿಕ್ಷೆ ಬೇಡುವ ಪರಿಸ್ಥಿತಿ ಆಗೋದು ಖಚಿತ !!

ಕನ್ನಡಿಗರೇ ಎಚ್ಚೆತ್ತುಕೊಳ್ಳಿ ಕರ್ನಾಟಕ ಮತ್ತು ಕನ್ನಡವನ್ನು ಕಾಪಾಡಿಕೊಳ್ಳಿ...

ನಾಲ್ಕು ಇಂಗ್ಲಿಷ್ ಅಕ್ಷರ ಬರೆದೊಡನೆ,
ನಾಲ್ಕು ಹಿಂದಿ ಪದ, ಮಾತಾಡಿದೊಡನೇ
ನೀವೇನೋ ದೊಡ್ಡ ಸಾಧನೆ ಮಾಡಿದಂತಾಗುವುದಿಲ್ಲ !

ಕನ್ನಡ ಬಳಸಿ ಕೊನೆಪಕ್ಷ ಮುಂದಿನ ನಮ್ಮ ತಲೆಮಾರಿಗೆ ನಮ್ಮ ಮಾತೃಭಾಷೆಯನ್ನು ಉಳಿಸಿಕೊಟ್ಟ, ಬೆಳಸಿಕೊಟ್ಟ ಆತ್ಮತೃಪ್ತಿಯಾದರೂ ದೊರೆಯುತ್ತದೆ !!

ಜೈ ಹಿಂದ್,
ಜೈ ಕರ್ನಾಟಕ ಮಾತೆ !!!

Address


Website

Alerts

Be the first to know and let us send you an email when Punith Kumar r posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Travel Agency?

Share